ಆ ಶಾಕ್ ನಿಂದ ಟಿವಿ9 ಮಿತ್ರರು ಇನ್ನೂ ಹೊರ ಬಂದಿಲ್ಲ.
ಪ್ರೊಡಕ್ಷನ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ರವೀಂದ್ರ ಇನ್ನಿಲ್ಲ ಎಂಬ ಸತ್ಯವನ್ನು ಒಪ್ಪಲು ಎಲ್ಲರ ಮಸ್ಸುಗಳೂ ನಿರಾಕರಿಸುತ್ತಿವೆ.
ಆವತ್ತು ಜೂನ್ 17.
ಬೆಳಿಗ್ಗೆ 11.05 ಕ್ಕೆ ಪ್ರೊಡಕ್ಷನ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ರವೀಂದ್ರ ಮೂಲಿಮನೆ ಎಂದಿನಂತೆ ಆಫೀಸಿಗೆ ಬಂದಿದ್ದಾನೆ. ಮೂರನೇ ಮಹಡಿಯಲ್ಲಿರುವ ಟಿವಿ9 ಕ್ಯಾಂಟೀನ್ ನಲ್ಲಿ ಗ್ರಾಫಿಕ್ ವಿಭಾಗದ ಮುಖ್ಯಸ್ಥ ಸಿದ್ದೇಶ್ ಜೊತೆ ತಿಂಡಿ ತಿನ್ನುತ್ತಿದ್ದ. ಅದೇನಾಯ್ತೋ ಗೊತ್ತಿಲ್ಲ. ಸಿದ್ದೇಶ್ ಮೈಗೆ ತಾಗಿಕೊಂಡಂತೆ ರವಿಂದ್ರ ಧೀಡೀರನೆ ಕುಸಿದು ಬಿದ್ದಿದ್ದಾನೆ. ಆರಂಭದಲ್ಲಿ ಸಿದ್ದೇಶ್ ತಮಾಷೆಗೆ ಏನೋ ಮಾಡ್ತಿದ್ದಾನೆ ಎಂದುಕೊಂಡರೂ, ಒಂದೆರಡು ಸೆಕೆಂಡ್ ಗಳಲ್ಲೇ ಸತ್ಯದ ಅರಿವಾಗಿದೆ. ರವೀಂದ್ರ ಏನಾಯ್ತೋ ಎಂದು ಕೂಗಿದ್ದಾನೆ. ರವೀಂದ್ರ ಪೂತಿಱ ಕುಸಿದು ಕೆಳಗೆ ಬೀಳುವಷ್ಟರಲ್ಲಿ ಸಿದ್ದೇಶ್ ಮೊದಲನೆ ಮಹಡಿಗೆ ಜಿಗಿದು ಓಡಿ ಬಂದಿದ್ದ. ಏದುಸಿರು ಬಿಡುತ್ತಲೇ ಸೀನಿಯರ್ ಪ್ರೊಡ್ಯೂಸರ್ ರವಿ ಕುಮಾರ್ ಗೆ ರವೀಂದ್ರ ಕುಸಿದು ಬಿದ್ದ ಎಂದಿದ್ದಾನೆ. ಇದ್ದದ್ದೆಲ್ಲ ಬಿಟ್ಟು ಮೇಲೆ ಓಡುವಷ್ಟರಲ್ಲಿ, ಕೆಳಗೆ ಪ್ರಾಣೇಶ್ ರವೀಂದ್ರನನ್ನು ಹೊತ್ತುಕೊಂಡೇ ಬರುತ್ತಿದ್ದ. ಯಾರಿಗೂ ಏನಾಯ್ತು ಎಂದು ತಿಳಿಯುತ್ತಲೇ ಇರಲಿಲ್ಲ.
ತಕ್ಷಣ ಕಾರಿನಲ್ಲೇ ರವೀಂದ್ರನನ್ನು ಹಾಕಿಕೊಂಡು, ಒನ್ ವೇ-ಟುವೇ ಗಳನ್ನು ಲೆಕ್ಕಿಸದೆ ಕೇವಲ 3-4 ನಿಮಿಷದಲ್ಲಿ ಟಿವಿ9 ಕಚೇರಿಗೆ ಸಮೀಪದ ಆಸ್ಪತ್ರೆಗೆ ಸೇರಿಸಿದ್ದಾರೆ.
ಆದರೆ ಕಾಲ ಮಿಂಚಿತ್ತು.
ವೈದ್ಯರು ರವೀಂದ್ರ ತೀವ್ರ ಹೃದಯಾಘಾತದಿಂದ ಇನ್ನಿಲ್ಲ ಎಂದಾಗ ಅಲ್ಲಿ ಸೇರಿದ್ದ ಟಿವಿ9 ಎಲ್ಲಾ ಮಿತ್ರರಿಗೂ ತಲೆ ಸುತ್ತಿ ಬಂದ ಅನುಭವ.
ಮಿತ್ರ ರವೀಂದ್ರನ ನಿಜ ಜೀವನದ ಪ್ರೋಮೋ ಕಂಪ್ಲೀಟ್ ಆಗದೇ ಅಧಱಕ್ಕೆ ನಿಂತು ಹೋಗಿತ್ತು.
* * *
ಟಿವಿ9 ಆರಂಭದಿಂದಲೂ ಭ್ರಷ್ಟಾಚಾರದ ವಿರುದ್ಧದ ಹೋರಾಟದ ಒಂದು ಪ್ರೋಮೋ ಬರ್ತಿತ್ತು. ಅದರಲ್ಲೊಬ್ಬ ಹಣ್ಣು ಹಣ್ಣು ಮುದುಕ ಭ್ರಷ್ಟಾಚಾರದ ವಿರುದ್ದ ಟಿವಿ9 ಗೆ ಕರೆ ಮಾಡಿ, “ಹಲೋ ಟಿವಿ9′ ಎಂದು ಹೇಳುತ್ತಿದ್ದ. ಈ ಪ್ರೋಮೋ ಎಷ್ಟು ಕ್ಲಿಕ್ ಆಗಿತ್ತು ಎಂದರೆ ಅದಕ್ಕೆ ಬರುತ್ತಿದ್ದ ಪ್ರತಿಕ್ರಿಯೆಗಳ ಮಹಾಪೂರವೇ ಸಾಕ್ಷಿ.
ಟಿವಿ9 ಸೇರುವ ಮುನ್ನ, ಈ ಪ್ರೋಮೋ ನೋಡಿ ಸ್ವತ: ನಾನೂ ಸಹ ಇಷ್ಟಪಟ್ಟಿದ್ದೆ.
ಇತ್ತೀಚೆಗೆ ಅಷ್ಟೇ ಗಮನ ಸೆಳೆದ ಮತ್ತೊಂದು ಪ್ರೋಮೋ ಪುಟ್ಟ ಮಕ್ಕಳ ಶಾಲೆಗೆ ಹೋಗೊಣ ಬಾ ಗೆಳೆಯ. ಗ್ಯಾರೇಜ್ ನಲ್ಲಿ ಕೆಲಸ ಮಾಡುತ್ತಿದ್ದ ಬಾಲ ಕಾಮಿಱಕನನ್ನು ಶಾಲೆಗೆ ಹೋಗುತ್ತಿದ್ದ ಇಬ್ಬರು ಪುಟ್ಟ ಮಕ್ಕಳು, ತಮ್ಮ ಜೊತೆ ಶಾಲೆಗೆ ಕರೆದುಕೊಂಡು ಹೋಗುವ ಪ್ರೋಮೋ ಜನ ಮನ್ನಣೆಗೆ ಪಾತ್ರವಾಗಿತ್ತು.
ಇಂತಹ ಪ್ರೋಮೋಗಳ ಹಿಂದೆ ರವೀಂದ್ರನ ಕೆಲಸದ ಕೈ ಚಳಕವಿತ್ತು. ಟಿವಿ9 ಅನೇಕ ಪ್ರೋಮೋಗಳಿಗೆ ರವೀಂದ್ರ ಜೀವ ತುಂಬುವ ಶಕ್ತಿಯಾಗಿದ್ದ. ಟಿವಿ9 ನಲ್ಲಿ ಹೊಸ ಪ್ರೋಮೋದ ಕಾನ್ಸೆಪ್ಟ್ ಸಿದ್ಧವಾದ ಕೂಡಲೇ ಅದನ್ನು ಅಂತಿಮ ಹಂತಕ್ಕೆ ತರುವವರೆಗಿನ ಜವಾಬ್ದಾರಿ ರವೀಂದ್ರನದ್ದೇ. ಹೀಗಾಗಿಯೇ ಟಿವಿ9 ಮುಖ್ಯಸ್ಥ ಮಹೇಂದ್ರ ಮಿಶ್ರಾ, ಸೀನಿಯರ್ ಪ್ರೊಡ್ಯೂಸರ್ ರವಿಕುಮಾರ್, ಇನ್ ಪುಟ್ ಮುಖ್ಯಸ್ಥ ಲೂಯಿಸ್, ಔಟ್ ಪುಟ್ ಮುಖ್ಯಸ್ಥ ಮಾರುತಿ ಇವರೆಲ್ಲ ರವೀಂದ್ರ ಇದ್ದಾನೆಂದು ನೆಮ್ಮದಿಯಾಗಿ ಇರುತ್ತಿದ್ದರು. ಅಷ್ಟು ರವೀಂದ್ರನ ಮೇಲೆ, ಆತನ ಕೆಲಸದ ಮೇಲೆ ವಿಶ್ವಾಸವಿತ್ತು.
ಅದಕ್ಕೆ ಕಾರಣವೂ ಇಲ್ಲದಿಲ್ಲ. ರವೀಂದ್ರನಿಗೆ ದೃಶ್ಯ ಮಾಧ್ಯಮಕ್ಕೆ ಬೇಕಾದ ಒಳ ನೋಟವಿತ್ತು. ಕಲರ್ ಕಾಂಬಿನೇಷನ್, ಸೂಪರ್ ಎನ್ನಿಸುವ ಡ್ರೆಸ್ ಸೆನ್ಸ್ ಹಾಗೂ ಅದ್ಭುತ ಎನ್ನಿಸುವ ಮ್ಯೂಸಿಕ್ ಸೆನ್ಸ್ ಇತ್ತು. ಪ್ರತಿ ಪ್ರೋಮೋದಲ್ಲೂ ಏನಾದರೂ ಹೊಸದಿರಬೇಕು. ವೆರೈಟಿ ಇರಬೇಕು ಎನ್ನುತ್ತಿದ್ದ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಚಾನೆಲ್ ಗಳನ್ನು ಸೂಕ್ಷ್ಮವಾಗಿ ಗಮನಿಸಿ, ಅವರಿಗೆ ಸಮಾನದ, ಅನೇಕ ಸಲ ಅವರಿಗಿಂತ ಉತ್ತಮವಾದ ಪ್ರೋಮೋ ರೆಡಿ ಮಾಡುತ್ತಿದ್ದ.
ಈ ಕಾಂಬಿನೇಷನ್ ಜೊತೆ ಸೇರಿದರೆ ಎಂತಹ ಪರಿಣಾಮ ಬೀರಬಲ್ಲವು ಎಂಬುದಕ್ಕೆ ಟಿವಿ9 ನಲ್ಲಿ ಉತ್ತಮ ಸಮಾಜಕ್ಕಾಗಿ ಎಂಬ ಹೆಸರಿನಲ್ಲಿ ಬರುತ್ತಿದ್ದ, ವಿವಿಧ ಸಮಸ್ಯೆಗಳನ್ನು ಪ್ರತಿ ಬಿಂಬಿಸುತ್ತಿದ್ದಂತಹ ಪ್ರೋಮೋಗಳು ಹುಟ್ಟಿಸಿದ್ದ ಕ್ರೇಜೇ ಸಾಕ್ಷಿ. ಜನರು ಟಿವಿ9 ನಲ್ಲಿ ಬ್ರೇಕ್ ಬಂತು ಎಂದು ಚಾನೆಲ್ ಚೇಂಜ್ ಮಾಡುತ್ತಿರಲಿಲ್ಲ. ಬದಲಿಗೆ ಇದು ಯಾವ ಪ್ರೋಮೋ ಎಂದು ನೋಡಲು ಕೂರುತ್ತಿದ್ದರು. ಮತ್ತೆ ಮತ್ತೆ ನೋಡಿದ ಪ್ರೋಮೋವನ್ನೇ ನೋಡುತ್ತಿದ್ದರು.
ಕನ್ನಡದ ಚಾನೆಲ್ ಗಳಲ್ಲಿ ಪ್ರೋಮೊಗಳಿಗೂ ಒಂದೊಳ್ಳೆಯ ಪ್ರೋಗ್ರಾಂನಷ್ಟೆ ವ್ಯಾಲ್ಯೂ ತಂದುಕೊಟ್ಟದ್ದು ರವೀಂದ್ರ ಎಂದರೆ ಅತಿಶಯೋಕ್ತಿ ಆಗಲಾರದು. ಹೀಗೆ ಪ್ರೋಮೋಗಳಿಗೆ ರವೀಂದ್ರ ಜೀವ ತುಂಬುತ್ತಿದ್ದ. ಆದರೆ ಈಗ ಆ ಜೀವವೇ ಇಲ್ಲ.
* * *
ರವೀಂದ್ರ ಜೀವನ ಪ್ರೇಮಿ. ಕೆಲಸದೆಡೆ ಕಮಿಟ್ ಮೆಂಟ್ ಇತ್ತು. ತನ್ನ ಕೆಲಸವನ್ನು ಎಂಜಾಯ್ ಮಾಡ್ತಿದ್ದ. ಇದೆಂಥಹ ಕೆಲಸ ಮಾರಾಯ ಎಂದು ಎಂದೂ ಸಹ ಗೊಣಗಿದವನಲ್ಲ. ಬಟ್ಟೆ, ಶೂಸ್ ಗಳ ಬಗ್ಗೆ ಅದೇನೋ ಕ್ರೇಜ್! ಊಟ, ಅದರಲ್ಲೂ ಗೆಳೆಯರ ಮನೆಯೂಟ ಎಂದರೆ ಇನ್ನಿಲ್ಲದ ಪ್ರೀತಿ!
ಟಿವಿ9 ಗೆ ಮದ್ಯಾಹ್ನ, ಮೂರನೇ ಮಹಡಿಗೆ ಊಟದ ಸಮಯದಲ್ಲಿ ಭೇಟಿ ನೀಡಿದವರೆಲ್ಲ ಒಂದು ವಿಷಯ ಗಮನಿಸಿರುತ್ತಾರೆ. ಅಲ್ಲಿ ಪ್ರತಿ ಟೇಬಲ್ ನಿಂದಲೂ ನಗೆಯ ಅಲೆ ತೇಲಿ ಬರುತ್ತಿರುತ್ತದೆ. ಪ್ರತಿ ಟೇಬಲ್ ಮೇಲೂ 3-4 ಊಟದ ಬಾಕ್ಸ್ ಗಳಿರುತ್ತವೆ. ಆದರೆ ಊಟಕ್ಕೆ ಮಾತ್ರ 7-8 ಜನ ನೆರೆದಿರುತ್ತಾರೆ. ಬಹುತೇಕರು ತಮಗೊಬ್ಬರಿಗೆ ಮಾತ್ರ ಊಟ ಕಟ್ಟಿಸಿಕೊಂಡು ಬಂದಿರುವುದಿಲ್ಲ. 2-3 ಜನಕ್ಕೆ ಆಗುವಷ್ಟು ಕಟ್ಟಿಸಿಕೊಂಡು ಬಂದಿರುತ್ತಾರೆ. ರಂಗನಾಥ್, ರಾಧಿಕಾ, ರವಿಕುಮಾರ್, ನ್ಯಾನ್ಸಿ, ದೇಸಾಯಿ, ಲೂಯಿಸ್, ಮಾರುತಿ, ರಾಘು, ಸಿದ್ದೇಶ್, ಮಂಜುನಾಥ್, ವಿಲಾಸ್, ಸುನಿಲ್, ರಮೇಶ್ ಬಾಬು, ಹಮೀದ್, ರಹಮಾನ್, ಗೌರೀಶ್ ಹೀಗೆ ಒಂದು ದೊಡ್ಡ ಮಿತ್ರ ಮಂಡಳಿಯೇ ನೆರೆದಿರುತ್ತದೆ. ಈ ಮಿತ್ರ ಮಂಡಳಿಯ ಖಾಯಂ ಸದಸ್ಯ ರವೀಂದ್ರ.
ಈಗ ಮೂರನೇ ಮಹಡಿಗೆ ಹೋದರೆ ಎಲ್ಲವೂ ಯಾಂತ್ರಿಕವಾಗಿ ಸಾಗುತ್ತಿರುತ್ತದೆ. ಊಟ ಮಾಡುವ ಗೆಳೆಯರೂ ಇರುತ್ತಾರೆ. ಆದರೆ ರವೀಂದ್ರನಿಲ್ಲ. ಹೀಗಾಗಿ ಪ್ರತಿ ತುತ್ತು ಬಾಯಿಗೆ ಇಡುವಾಗಲಿ ಮಿತ್ರರ ಕಣ್ಣು ಮಂಜು ಮಂಜು.
* * *
ರವೀಂದ್ರನ ಅಂತ್ಯಕ್ರಿಯೆ ನಡೆದ ಮರುದಿನ ಕೆಲ ಪತ್ರಕತಱ ಮಿತ್ರರು ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದರು. ರವೀಂದ್ರನ ಕುಟುಂಬಕ್ಕೆ ಸಹಾಯ ಕೇಳಿದ್ದರು. ತಕ್ಷಣ ಅದೇ ದಿನ ನಡೆದ ಕ್ಯಾಬಿನೆಟ್ ನಲ್ಲಿ ನಿಧಾಱರ ತೆಗೆದುಕೊಂಡ ಸಿಎಂ 2 ಲಕ್ಷ ರೂ. ಪರಿಹಾರ ನೀಡಿಬಿಟ್ಟರು. ಅಷ್ಟೇ ಅಲ್ಲ, ರವೀಂದ್ರನ ಅಕಾಲಿಕ ಮರಣವನ್ನೇ ಆಧಾರವಾಗಿಟ್ಟುಕೊಂಡು, ಪತ್ರಕತಱರ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸುವುದಾಗಿಯೂ, ಶೀಘ್ರವೇ ಅದರ ರೂಪು ರೇಷೆಗಳನ್ನು ನಿಧಱರಿಸುವುದಾಗಿಯೂ ತಿಳಿಸಿದರು. ರವೀಂದ್ರ ತನ್ನ ಸಾವಿನಲ್ಲೂ ಪತ್ರಕತಱರಿಗೆ ಅನುಕೂಲವಾಗುವ ಹೊಸ ಯೋಜನೆಗೆ ಪ್ರೇರಕನಾಗಿ ಹೋಗಿದ್ದಾನೆ. ಅಂತಿಮ ಪಯಣದಲ್ಲೂ ಸಮಾಜಕ್ಕೆ, ಒಂದು ಸಮುದಾಯಕ್ಕೆ ಉಪಯೋಗ ಮಾಡಿ ಹೋಗುವುದು ಎಂದರೆ ಇದೇನಾ?
* * *
ರವಿಂದ್ರ ಹುಟ್ಟಿದ್ದು ದಾರವಾಡ ಸಮೀಪದ ದಾಸನಕೊಪ್ಪದಲ್ಲಿ. ಓದಿದ್ದೆಲ್ಲ ಧಾರವಾಡದಲ್ಲಿ. ಅಣ್ಣ ರಾಜಣ್ಣ ಕೃಷಿಕ. ತಂದೆ ಚಂದ್ರಶೇಖರ್. ಬಡತನದೊಂದಿಗೇ ಬೆಳೆದು ಬಂದ ರವೀಂದ್ರ ಇ-ಟಿವಿಯಲ್ಲಿ 5 ವಷಱ, ನಂತರ ಟಿವಿ9 ಸೇರಿಕೊಂಡು ನಿಧಾನವಾಗಿ ನೆಲೆ ಕಂಡುಕೊಳ್ಳುತ್ತಿದ್ದ. ಮದುವೆಯಾಗಲೂ ನಿಧಱರಿಸಿದ್ದ. ತಂದೆ ಮನೆ ಕಟ್ಟಿಸಲು ನಿಧಱರಿಸಿದಾಗ ರವಿಂದ್ರ ಒತ್ತಾಯಿಸಿ, ಫಸ್ಟ್ ಫ್ಲೋರ್ ಕೂಡಾ ಕಟ್ಟಿಸೋಣ ಎಂದಿದ್ದ. ಮನೆಯ ಆಧಾರ ಸ್ತಂಭ ರವೀಂದ್ರ ಹೇಳಿದ ಮಾತಿಗೆ ತಂದೆ ಇಲ್ಲವೆಂದಿಲ್ಲ. ಈಗ ಫಸ್ಟ್ ಫ್ಲೋರ್ ಅಧಱಕ್ಕೆ ನಿಂತಿದೆ. ಪ್ಲಾಸ್ಟರಿಂಗ್ ಇಲ್ಲ.
ರವೀಂದ್ರನ ಅಂತ್ಯಸಂಸ್ಕಾರಕ್ಕೆ ಏನಿಲ್ಲವೆಂದರೂ 20 ಕ್ಕೂ ಹೆಚ್ಚಿನ ಟಿವಿ9 ಗೆಳೆಯರು ದಾಸನಕೊಪ್ಪಕ್ಕೆ ಹೋಗಿದ್ದರು. ಕಸ್ತೂರಿ, ಏಷ್ಯಾನೆಟ್ ಸುವಣಱ, ದೂರದಶಱನ, ಉದಯ ಹಾಗೂ ಪ್ರಿಂಟ್ ಮೀಡಿಯಾದ ನೇಕ ಗೆಳೆಯರು ಹೋಗಿದ್ದರು. ಅಂತ್ಯಕ್ರಿಯೆ ನಂತರ ಮನೆಗೂ ಹೋಗಿ ಸಾಂತ್ವಾನ ಹೇಳಿ ಬಂದಿದ್ದಾರೆ. ಆದರೆ ಆತನ ತಂದೆ, ತಾಯಿ, ಅಣ್ಣ ಅದರಲ್ಲು ವಿಶೇಷವಾಗಿ ರವೀಂದ್ರನ ಜೀವನ ಸಂಗಾತಿಯಾಗಬೇಕಿದ್ದ ಆ ಜೀವದ ದುಖ:ದ ಕಟ್ಟೆ ತಡೆಯಲು ಯಾರಿಗೂ ಸಾಧ್ಯವಾಗಿಲ್ಲ.
ರವೀಂದ್ರನ ತಾಯಿ ತುಂಬು ಗಣ್ಣುಗಳಿಂದ “ಬಂದು ಹೋಗ್ತಾ ಇರಿ. ನನ್ನ ಪಾಲಿಗೆ ಇನ್ನು ನೀವೆಲ್ಲರೂ ರವಿಂದ್ರರೇ”! ಎಂದಾಗಲಂತೂ ತಡೆಯಲಾಗದೇ ಟಿವಿ9 ಮಿತ್ರರೆಲ್ಲ ಬಿಕ್ಕಳಿಸಿ ಅತ್ತಿದ್ದಾರೆ.
ರವೀಂದ್ರನ ಅನೇಕ ಕನಸುಗಳಲ್ಲಿ ಮನೆಯೂ ಒಂದು. ಹೀಗಾಗಿ ಆ ದಿನ ಮನೆಗೆ ಹೋದ ಟಿವಿ9 ಮಿತ್ರರೆಲ್ಲ ರವೀಂದ್ರನ ಎಲ್ಲಾ ಕನಸುಗಳನ್ನು ಪೂತಿಱ ಗೊಳಿಸುವ ಶಕ್ತಿ ನಮಗಿಲ್ಲ. ಆದರೆ ಆತನ ನೆನಪಿಗೆ ನಾವೇ ಈ ಮನೆ ಕಟ್ಟಿಸಿಕೊಡುತ್ತೇವೆ. ಅದರ ಜವಾಬ್ದಾರಿ ನಮಗಿರಲಿ. ಎಂಬ ಭರವಸೆ ನೀಡಿ ಬಂದಿದ್ದಾರೆ.
ಇದು ತಿಳಿದು ರವೀಂದ್ರನ ಆತ್ಮಕ್ಕೆ ಸ್ವಲ್ಪವಾದರೂ ನೆಮ್ಮದಿ ಸಿಕ್ಕಿರಬಹುದೇನೋ??
ಆದರೆ ಯಾರೇನೇ ಮಾಡಿದರೂ, ಆ ಕುಟುಂಬಕ್ಕೆ ರವೀಂದ್ರನ ಅಗಲಿಕೆಯಿಂದ ಆದ ನಷ್ಟ ತುಂಬಿಕೊಡುವುದಾಗುವುದಿಲ್ಲ.
ಆದರೆ ಯಾಕೆ ಸುಖಮಯ ಜೀವನ ಆರಂಭವಾಗುವ ಸಂಧಭಱದಲ್ಲೇ ರವೀಂದ್ರ ಹೀಗೆ ಧಡ್ಡನೆ ಎದ್ದು ಹೊರಟು ಹೋದ ಎಂದು ಅಥಱವಾಗುತ್ತಿಲ್ಲ.
ರವೀಂದ್ರನ ಅಗಲಿಕೆ ಭರಿಸುವ ಶಕ್ತಿ ಆತನ ಕುಟುಂಬಕ್ಕೆ ಹಾಗೂ ಮಿತ್ರಮಂಡಳಿಗೆ ದೊರೆಯಲಿ.
* * *

