ಓದುವ ಮುನ್ನ:
ಜುಲೈ 13 ರಂದು ಸಾವಿನ ನಂತರವೇ ಏಕೆ? ಎಂಬ ಬರಹದಲ್ಲಿ ನಾನು ಯಾರಿಂದೆಲ್ಲ ಪ್ರೇರಿತನಾಗಿದ್ದೇನೆ, ಅಥವಾ ಯಾರಿಂದ ಸ್ವಲ್ಪವಾದರೂ ಕಲಿತಿದ್ದೇನೆ, ಅಂತಹವರ ಬಗ್ಗೆ ಇನ್ನು ಮುಂದೆ ಬರೆಯುತ್ತೇನೆ ಎಂದಿದ್ದೆ.
ಈಗ ಈ ಸರಣಿಯ ಮೊದಲ ವ್ಯಕ್ತಿಯಾಗಿ ಬೇದ್ರೆ ಮಂಜುನಾಥ್ ಅವರನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಓದಿದ ನಂತರ ನನ್ನ ಆಯ್ಕೆ ಸರಿಯಾಗಿದ್ದರೆ ನನಗೂ ತಿಳಿಸಿ. ಇಲ್ಲಿ ಬರೆಯುವ ಬಗ್ಗೆ ಬೇದ್ರೆ ಅವರಿಗೆ ನಾನು ತಿಳಿಸಿಯೇ ಇಲ್ಲ. ಹೀಗಾಗಿ ಇದರಲ್ಲಿ ಅವರ ಮನಸ್ಸಿಗೆ ನೋವಾಗುವಂತದ್ದು ಏನಾದರೂ ಇದ್ದರೆ ಈಗಲೇ ಕ್ಷಮೆ ಕೇಳಿ ಬಿಡುತ್ತೇನೆ.
ಓದಿದ ನಂತರ ಬೇದ್ರೆ ಬರಹಗಳ ಬಗ್ಗೆ, ಅವರ ಭಾಷಾ ಪ್ರಯೋಗಗಳ ಬಗ್ಗೆ ಆಸಕ್ತಿ ಇದ್ದವರು ಈ ಕೆಳಗಿನ ಬ್ಲಾಗ್ ಗಳಿಗೆ ಭೇಟಿ ನೀಡಬಹುದು.
www.bedrebaraha.blogspot.com
www.bedrebrains.blogspot.com
www.bedrefoundation.blogspot.com
www.bedrebhashe.blogspot.com
ಬೇದ್ರೆ ಮಂಜುನಾಥ್ ವಿಳಾಸ:
Bedre Foundation for Non-Formal Education, Research and Training, Teacher’s Colony, Chitradurga – 577501, Hobby & Adventure UNESCO Club, Chitradurga bedre.manjunath@gmail.com.
ಮೊಬೈಲ್:94485-89089, ಅಥವಾ (08194)228074.
* * * * * * * * * * * * * * * * * *
ಐ ಯಾಮ್ ರಿಯಲಿ ಜೆಲಸ್ ಆಫ್ ಹಿಮ್ !
ಆದರೆ ಇದು ಹೊಟ್ಟೆಕಿಚ್ಚಿನ ಜೆಲಸ್ ಅಲ್ಲ. ಬದಲಿಗೆ ಮೆಚ್ಚುಗೆಯ ಜೆಲಸ್!!
ಅವರಷ್ಟು ಕ್ರಿಯಾಶೀಲವಾಗಿ, ಆರೋಗ್ಯಕರವಾಗಿ, ಲವಲವಿಕೆಯಿಂದ, ಹೊಸ ಯೋಚನೆಗಳೊಂದಿಗೆ, ಯೋಜನೆಗಳೊಂದಿಗೆ ನಮಗೆ ಬದುಕಲಾಗುತ್ತಿಲ್ಲವಲ್ಲ ಎಂಬ ಮೆಚ್ಚುಗೆ, ಗೌರವ, ಪ್ರೀತಿ, ಅಚ್ಚರಿಗಳು ಬೆರೆತ ಆರೋಗ್ಯಕರ ಜೆಲಸಿ.
ಈ ಮಾತು ನಾನು ಹೇಳಬಯಸೋದು ಬೇದ್ರೆ ಮಂಜುನಾಥ್ ಬಗ್ಗೆ.
ಬೇಂದ್ರೆ ಮಂಜುನಾಥ್ ಯಾರು ಎಂದು ಕನ್ನಡಿಗರಿಗೆ, ಪುಸ್ತಕ ಪ್ರೇಮಿಗಳಿಗೆ ಹೇಳುವ ಅವಶ್ಯಕತೆ ಇಲ್ಲ. ಚಿತ್ರದುರ್ಗದ ಆಕಾಶವಾಣಿಯಲ್ಲಿದ್ದರೂ, ಸರಕಾರಿ ಹುದ್ದೆಯ ಮಿತಿಗಳಿದ್ದರೂ, ಅವುಗಳನ್ನೆಲ್ಲಾ ಮೀರಿದ ಕ್ರಿಯಾಶೀಲತೆ ಬೇದ್ರೆ ಮಂಜುನಾಥ್ ಅವರದ್ದು.
* * *
ನಾನು ಹೈಸ್ಕೂಲ್ ಓದುತ್ತಿದ್ದಾಗ ದಿಕ್ಸೂಚಿ ಜ್ಞಾನ ಮಾಸ ಪತ್ರಿಕೆ ಕೊಳ್ಳುವುದು ಒಂದು ರೀತಿ ಜೀವನದ ಭಾಗವಾಗಿ ಹೋಗಿತ್ತು. ಆಗ ದಿಕ್ಸೂಚಿಯಲ್ಲಿ ಬೇದ್ರೆ ಮಂಜುನಾಥ್ ಬರೆದ ಅನೇಕ ಲೇಖನಗಳನ್ನು ಓದಿದ್ದೆ. ಆದರೆ ಅವರನ್ನು ನೋಡಿರಲಿಲ್ಲ. ಮಾತನಾಡಿರಲಿಲ್ಲ. ಡಿಗ್ರಿ ಓದುವಾಗ ಅವರ ಲೇಖನಗಳನ್ನು ಓದಿ ಮಾತನಾಡಿಸಿ ಪರಿಚಯ ಮಾಡಿಕೊಳ್ಳಬೇಕೆಂದಿದ್ದೆ. ಆಗಿರಲಿಲ್ಲ. ಆಗಿನ್ನೂ ನಾನು ಪತ್ರಕರ್ತನೂ ಆಗಿರಲಿಲ್ಲ. ಆಗುತ್ತೇನೆ ಅಂತ ಅಂದುಕೊಂಡೂ ಇರಲಿಲ್ಲ.
ಅವರ ಪರಿಚಯವಾಗಿದ್ದು ವಿಜಯ ಕನಾಱಟಕ ಸೇರಿದ ಮೇಲೆ. ಒಂದು ವರ್ಷ ಬಿಜಾಪುರದಲ್ಲಿ ಕೆಲಸ ಮಾಡಿದ ನಂತರ, 2003ರ ಜನವರಿಯಲ್ಲಿ ದಾವಣಗೆರೆ ಜಿಲ್ಲಾ ವರದಿಗಾರನಾಗಿ ವಗಾಱವಣೆಯಾಗಿತ್ತು. ಚಿತ್ರದುರ್ಗಕ್ಕೆ ಬಂದು ರಿಪೋಟ್ ಱ ಮಾಡಿಕೊಂಡೆ. ಎರಡು ದಿನಗಳ ನಂತರ ಬೆಳಿಗ್ಗೆ 10 ಗಂಟೆ ಹೊತ್ತಿಗೆ ಚಿತ್ರದುರ್ಗದ ವಿಜಯ ಕನಾಱಟಕದ ಗೆಳೆಯರಿದ್ದ ಮನೆಯಲ್ಲಿ ನಾನು ಪೇಪರ್ ಓದುತ್ತಿದ್ದೆ. ಚಿತ್ರದುರ್ಗ ಆವೃತ್ತಿ ಮುಖ್ಯಸ್ಥ್ಥರಾಗಿದ್ದ ಸತ್ಯನಾರಾಯಣ್ ನಳಪಾಕದಲ್ಲಿ ತೊಡಗಿದ್ದರು. ಆಗ ಸೀದಾ ಏನ್ ಮಾಡ್ತಿದ್ದಿರಿ ಸರ್? ಎಂದು ಬೇದ್ರೆ ಮಂಜುನಾಥ್ ಒಳ ನಡೆದು ಬಂದಿದ್ದರು. ಇನ್ನೇನು ಸರ್… ಅಡುಗೆ’ ಎಂದರು ಸತ್ಯನಾರಾಯಣ್. ನಂತರ ನನ್ನ ಕಡೆ ತಿರುಗಿ ಪರಿಚಯ ಮಾಡಿಕೊಟ್ಟರು. ಇವರು ಶಿವಪ್ರಸಾದ್. ಬಿಜಾಪುರದಿಂದ ದಾವಣಗೆರೆ ಜಿಲ್ಲಾ ವರದಿಗಾರರಾಗಿ ಬಂದಿದ್ದಾರೆ ಎಂದು ಪರಿಚಯಿಸಿದರು. ನಿಮ್ಮ ಬಗ್ಗೆ ಕೇಳಿದ್ದೆ. ನಿಮ್ಮ ಬರಹ ಓದಿದ್ದೆ. ಆದರೆ ಭೇಟಿ ಮಾಡ್ತಿರೋದು ಇದೇ ಮೊದಲು ಎಂದು ಪರಿಚಯ ಮಾಡಿಕೊಂಡೆ.
ಅಲ್ಲಿಂದ ಆರಂಭವಾದ ನಮ್ಮ ಸ್ನೇಹ ಇಂದಿಗೂ ಮುಂದುವರೆದಿದೆ. ದಾವಣಗೆರೆಗೆ ಅವರು ಬಂದಾಗ, ಅಥವಾ ನಾನು ಚಿತ್ರದುರ್ಗಕ್ಕೆ ಹೋದಾಗ ಒಬ್ಬರನ್ನೊಬ್ಬರು ಭೇಟಿ ಮಾಡದೇ ಹೋದ ದಿನಗಳು ಬಹು ಕಡಿಮೆ. ನಾನಂತೂ ಪ್ರತಿಸಾರಿ ಅವರ ಬಳಿ ಹೋದರೆ ಏನಾದರೂ ಹೊಸ ವಿಷಯ ತಿಳಿದೇ ತಿಳಿಯುತ್ತದೆ. ಅಥವಾ ಹಾಗೆ ಮಾಡಬೇಕು. ಹೀಗೆ ಮಾಡಬಹುದು ಎಂದು ಏನಾದರು ಹೊಸ ಐಡಿಯಾ, ಯೋಜನೆ ಬಗ್ಗೆ ಮಾತನಾಡುತ್ತಿದ್ದರು. ಯಾವುದೋ ಒಂದು ಸಮಸ್ಯೆಯನ್ನೋ, ವಿಷಯವನ್ನೋ ಮುಂದಿಟ್ಟು ಏನಾದ್ರೂ ಮಾಡ್ಬೇಕು ಸಾರ್ ಅನ್ನುತ್ತ ಕೆಲಸ ಮಾಡಲು ಪ್ರೇರೇಪಿಸುತ್ತಿದ್ದರು. (ನಾನು ಚಿಕ್ಕವನಿದ್ದರೂ ಅವರು ಕರೆಯುವುದು ಸಾರ್ ಅಂತಲೇ! ನನಗೆ ಅಂತಲ್ಲ. ಅವರಿಗಿಂತ ಚಿಕ್ಕವರಾಗಿರುವ ಅನೇಕರನ್ನು ಅವರು ಸಾರ್ ಎಂದೇ ಮಾತನಾಡಿಸುತ್ತಾರೆ.)
ಚಿತ್ರದುರ್ಗದಲ್ಲಿ ಮಿತ್ರರಿದ್ದ ಮನೆಯ ಹಿಂದೆಯೇ ಅವರೊಂದು ಮನೆ ಕಟ್ಟಿಸಿಕೊಂಡಿದ್ದರು. ಅದರಲ್ಲಿ ಅವರ ಸಾವಿರಾರು ಪುಸ್ತಕಗಳ ಬೃಹತ್ ಭಂಡಾರ. ಒಂದು ಮಲ್ಟಿಮೀಡಿಯಾ ಇಂಗ್ಲಿಷ್ ಲ್ಯಾಬ್. ಅದನ್ನೆಲ್ಲ ಪ್ರಥಮ ಭೇಟಿಯಲ್ಲಿ ತೋರಿಸಿದ್ದರು. ಆಗಲೇ ಅವರ ಸ್ಕೂಲ್ ಡೈರಿ ಎಂಬ ಪುಸ್ತಕ ನೋಡಿದ್ದು. ಅದನ್ನು ನೋಡಿದಾಗ ಎಷ್ಟು ಸರಳವಾಗಿ ನಾವು ಭಾಗವಹಿಸುವ, ಕೇಳುವ, ವಿವಿಧ ವಿಶೇಷ ದಿನಗಳ ಬಗ್ಗೆ ಅವರು ಬರೆದಿದ್ದಾರೆ ಅನ್ನಿಸಿತ್ತು. ನಾನೂ ಏಕೆ ಆ ರೀತಿ ಏನಾದರೂ ಪುಸ್ತಕ ಬರೆಯಬಾರದು ಎಂಬ ಸಣ್ಣ ಆಸೆ ಆ ಪ್ರಥಮ ಭೇಟಿಯಲ್ಲಿ ಮನಸ್ಸಲ್ಲೇ ಮೂಡಿತ್ತು.
ನಂತರ ಒಂದೊಂದಾಗಿ ಅವರು ಬರೆದ ಪುಸ್ತಕಗಳನ್ನು ನೋಡುತ್ತಾ ಹೋದ ಹಾಗೆ, ಇವರೇನು ಮನುಷ್ಯರೋ, ದೈತ್ಯರೋ?? ಸರಕಾರಿ ಕೆಲಸದ ನಡುವೆ, ಮಕ್ಕಳನ್ನು ಬೆಳೆಸುವ ಜವಾಬ್ದಾರಿ ಜೊತೆಗೆ ಯಾವಾಗ ಟೈಮು ಮಾಡಿಕೊಳ್ಳುತ್ತಾರೆ? ಯಾವಾಗ ಬರೆಯುತ್ತಾರೆ ಎಂದು ಚಿಂತಿಸಿದ್ದೆ. ಒಬ್ಬ ಮನುಷ್ಯನನ್ನು ಆರಂಭದಲ್ಲೇ ನಿವೃತ್ತ ಜೀವನಕ್ಕೆ ನೂಕಿ ಬಿಡಲು, ಅಥವಾ ಆತನ ಕ್ರಿಯಾಶೀಲತೆ ಕೊಂದು ಬಿಡಲು ಸರಕಾರ ನೌಕರಿ ಒಂದೇ ಸಾಕು. ಆದರೆ ಅದರಲ್ಲಿದ್ದರೂ ಇತರರನ್ನು ನಾಚಿಸುವ ಕ್ರಿಯಾಶೀಲತೆ ಬೇದ್ರೆ ಅವರದ್ದು.
* * *
ಇಷ್ಟೆಲ್ಲಾ ಜಂಜಾಟಗಳ ನಡುವೆ ಬೇದ್ರೆ ಬರೆದ ಪುಸ್ತಕಗಳ ಸಂಖ್ಯೆ 50 ದಾಟಿದೆ. ಅವರು ನವ ಕನಾಱಟಕ ಪ್ರಕಾಶನದ ಖಾಯಂ ಬರಹಗಾರರು. ಅವರು ಬರೆದ ಪುಸ್ತಕಗಳಲ್ಲಿ ಭಾಷಾ ಆಟಗಳು, ಅಪ್ಲೈಡ್ ಇಂಗ್ಲಿಷ್ ಕೋಸ್್ (ಭಯಂಕರವಾಗಿ ಮಾರಾಟವಾಗುತ್ತಿರುವ ಈ ಪುಸ್ತಕ ಇನ್ನೇನು 20 ನೇ ಮುದ್ರಣಕ್ಕೆ ಸಜ್ಜಾಗುತ್ತಿದೆ), ವಡಱ ಪವರ್, ಲಾಂಗ್ವೇಜ್ ಲ್ಯಾಬ್, ಒನ್ ಮಿನಿಟ್ ಇಂಗ್ಲೀಷ್ ಹೀಗೆ ಹನುಮಂತನ ಬಾಲದಂತೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಆರಂಭದ ದಿನಗಳಲ್ಲೇ ಎರಡು ಕವನ ಸಂಕಲನಗಳನ್ನು ಹೊರ ತಂದಿದ್ದರು. ಅವರ ಬರಹಗಳನ್ನು ನೋಡುತ್ತಾ ಹೋದರೆ ಅದರಲ್ಲಿ ಪ್ರೀತಿ, ಪ್ರೇಮ, ಪ್ರಣಯ ಅಥವಾ ಇನ್ನಾವುದೋ ಕೆಲಸಕ್ಕೆ ಬಾರದ ಭಾವನಾತ್ಮಕ ಅಂಶಗಳ ಬಗ್ಗೆಯೋ, ಟೈಂಪಾಸ್ ಸಾಹಿತ್ಯವನ್ನೋ ಅಥವಾ ಇನ್ನೇನೋ ಸಿಗುವುದಿಲ್ಲ. ಏಕೆಂದರೆ ಅವರ ಬರವಣಿಗೆ ಯಾವಾಗಲೂ ಪ್ರಾಕ್ಟಿಕಲ್. ಅವರ ಪುಸ್ತಕಗಳು ಒಂದು ರೀತಿ ಜ್ಞಾನ ಭಂಡಾರ. ಅಂದಂದಿನ ಬೆಳವಣಿಗೆಗಳನ್ನು ತಮ್ಮ ಬರಹಗಳಲ್ಲಿ ಬಳಸುವ ಕಲೆ ಅವರಿಗೆ ಕರಗತ. ಮಕ್ಕಳು, ಹಾಗೂ ವಿಶೇಷವಾಗಿ ಯುವಕರು ಹಾಗೂ ಶಿಕ್ಷಕ-ಶಿಕ್ಷಕಿಯರು ಅವರ ಬರವಣಿಗೆಗಳ ಗುರಿ. ಅವರನ್ನು ಮುಟ್ಟಿದರೆ, ತಟ್ಟಿದರೆ, ನಿದ್ದೆಯಿಂದ ಎಚ್ಚರಿಸಿದರೆ, ಇಡೀ ಸಮಾಜವನ್ನು ಹೊಸ ದಿಕ್ಕಿಗೆ ಒಯ್ಯಬಹುದು ಎಂಬ ನಂಬಿಕೆ ಅವರದ್ದು.
* * *
ಇಂತಹ ಬೇದ್ರೆ ಮಂಜುನಾಥ್ ಅವರ ಖಾಸಗಿ ಬದುಕಿನ ಬಗ್ಗೆ, ಅವರು ಎಷ್ಟು ಕಷ್ಟಪಟ್ಟು ಮೇಲೆ ಬಂದರು ಎಂದು ಅನೇಕರಿಗೆ ಗೊತ್ತಿಲ್ಲ.
ಅವರು ಹುಟ್ಟಿದ್ದು 1967ರ ಜೂನ್ 10 ರಂದು. ಹುಟ್ಟಿದಾಗ ಮನೆಯಲ್ಲಿ ತೀವ್ರ ಬಡತನ. ಕಷ್ಟ ಅಷ್ಟಕ್ಕೇ ನಿಲ್ಲಲಿಲ್ಲ. ಬೇದ್ರೆ ಕೇವಲ 6 ವರ್ಷದವರಾಗಿದ್ದಾಗ ತಮ್ಮ ತಂದೆಯನ್ನು ಕಳೆದುಕೊಂಡಿದ್ದರು. ಬೇದ್ರೆ ಅವರ ತಾಯಿ, ಪುಟ್ಟ ಬಡ ಮಕ್ಕಳಿಗೆ ನರ್ಸರಿ ನಡೆಸುತ್ತಿದ್ದರು. ಇಡೀ ಕುಟುಂಬದ ಜವಾಬ್ದಾರಿ ಅವರ ಹೆಗಲಿಗೆ. ಬಡ ಮಕ್ಕಳಿಗೆ ನರ್ಸರಿ ನಡೆಸುತ್ತಿದ್ದರಿಂದ ಆದಾಯವೇನೂ ಇಲ್ಲ. ಹೀಗಾಗಿ ಬೇದ್ರೆ ಅತಿ ಚಿಕ್ಕ ವಯಸ್ಸಿನಲ್ಲೇ ಕೆಲಸಕ್ಕೆ ಕೊರಳೊಡ್ಡಬೇಕಾಯ್ತು. ಆದರೆ ಅವರ ಬದುಕನ್ನು ರೂಪಿಸಲು, ಸ್ಪಷ್ಟ ಚಿಂತನೆ, ವ್ಯಕ್ತಿತ್ವ ಬೆಳೆಸಿಕೊಳ್ಳಲು ಇದೇ ಸಹಕಾರಿಯಾಯ್ತು!
ಆರಂಭದಲ್ಲಿ ಕೆಲ ದಿನ ಮನೆ ಮನೆಗೆ ಹೋಗಿ ನ್ಯೂಸ್ ಪೇಪರ್ ಹಂಚಿ ಬರುವ ಪೇಪರ್ ಬಾಯ್ ಆಗಿದ್ದರು. ನಂತರ ಕೆಲ ವರ್ಷ ವೈದ್ಯರೊಬ್ಬರ ಕ್ಲಿನಿಕ್ನಲ್ಲಿ ವಾಡಱಬಾಯ್ ಆಗಿದ್ದರು. ಅವರ ತಾಯಿ ಹೇಳುವಂತೆ ಬೇದ್ರೆ ಮನೆಯಿಂದ ನಯಾ ಪೈಸೆ ಕೇಳದೆ ತಮ್ಮ ಓದನ್ನು ಪೂರೈಸಿದ್ದರು. 1987-89 ರ ಅವಧಿಯಲ್ಲಿ ತಮ್ಮದೇ ಖಚಿಱನಲ್ಲಿ ಇಂಗ್ಲಿಷ್ ಎಂ.ಎ. ಪೂತಿಱಗೊಳಿಸಿದರು. ಆ ವಿಷಯದಲ್ಲಿ ಅಂದಿಗೂ, ಇಂದಿಗೂ ಬೇದ್ರೆ ಯಾರ ಬಳಿಯೂ ಕೈ ಒಡ್ಡಿಲ್ಲ. ಇಂದು ಪಾಕೆಟ್ ಮನಿಗೆ ಕೈಯೊಡ್ಡುವ ನಮ್ಮ ಮಕ್ಕಳಿಗೆ ಬೇದ್ರೆಯವರ ಬಾಲ್ಯ, ಓದು ಪ್ರೇರಣೆಯಾಗಬಹುದು.
ಪುಸ್ತಕ ಬರೆಯುವ ಕಲೆ ಬೇದ್ರೆ ಅವರಿಗೆ ಚನ್ನಾಗಿ ಸಿದ್ಧಿಸಿತ್ತು. ಅವರು ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಬಿ.ಎ. ಓದುವಾಗಲೇ ಇಂಗ್ಲೀಷ್ ಗ್ರಾಮರ್ ಬಗ್ಗೆ ಪುಸ್ತಕ ಪ್ರಕಟಿಸಿದ್ದರು. ಆ ಪುಸ್ತಕವೇ 10 ಬಾರಿ ಮರು ಮುದ್ರಣವಾಯ್ತು! ಇಡೀ ಕುವೆಂಪು ವಿವಿಗೆ ಬೇದ್ರೆ ಇತಿಹಾಸದಲ್ಲಿ ಪ್ರಥಮರಾಗಿ ಹೊಮ್ಮಿದರು. ಇಂಗ್ಲೀಷ್ನಲ್ಲಿ ಎಂ.ಎ.ಮಾಡಲು ಬಯಸಿದ್ದ ಅವರು, ಮೈಸೂರಿಗೆ ತೆರಳಿದರು. ಎಂ.ಎ.ಮುಗಿದ ನಂತರ ಡಿವಿಎಸ್ ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಸೇವೆ. ನಂತರ ಆಲ್ ಇಂಡಿಯಾ ರೇಡಿಯೋದ ಉದ್ಯೋಗ ದೊರೆಯಿತು. 1991 ರಿಂದ ಚಿತ್ರದುರ್ಗದಲ್ಲಿ ಅವರ ಸೇವೆ ಮುಂದುವರೆದಿದೆ.
* * *
ಬೇದ್ರೆ ಇದ್ದಲ್ಲಿ ಒಂದು ಹುಡುಗರ ಗುಂಪು ಇರಲೇಬೇಕು. ಅಲ್ಲಿ ಏನಾದರೂ ಚಚೆಱ ನಡೆಯಲೇ ಬೇಕು. ತಮ್ಮ ಬಹುತೇಕ ಸಮಯವನ್ನು ಶಾಲಾ ಮಕ್ಕಳು, ಯುವಕರು ನಡುವೆ, ತಮ್ಮ ಬರವಣಿಗೆಯ ನಡುವೆ ಹಾಗೂ ಹಳೆಯ ತಲೆಮಾರಿಗೆ ಸೇರಿದ ಹಿರಿಯರ ನಡುವೆ ಕಳೆಯುತ್ತಾರೆ. ಬೆಳಗೆರೆ ಕೃಷ್ಣಶಾಸ್ತ್ರಿಗಳಂತಹವರೂ ಸಹ ಬೇದ್ರೆ ಅಪ್ತರ ಪಟ್ಟಿಯಲ್ಲಿದ್ದಾರೆ.
ಬೇದ್ರೆ ಶಿವಮೊಗ್ಗದಲ್ಲಿ ಇದ್ದಾಗಲೇ ಯುವಕರನ್ನು ಸಂಘಟಿಸಿ, ಆರೋಗ್ಯಕರ ಚಿಂತನೆಯತ್ತ ಅವರ ಮನಸ್ಸನ್ನು ಹೊರಳಿಸುವುದರ ಪ್ರಾಮುಖ್ಯತೆ, ಇದಕ್ಕಾಗಿ ಯೂತ್ ಕ್ಲಬ್ ಗಳ ಅವಶ್ಯಕತೆ ಅರಿತಿದ್ದರು. ಶಿವಮೊಗ್ಗದಲ್ಲಿದ್ದಾಗ ‘ಶಿವಮೊಗ್ಗ ಕ್ವಿಜ್ ಮತ್ತು ಅಡ್ವೆಂಚರ್ ಕ್ಲಬ್ ಅವರ ಚಟುವಟಿಕೆಗಳ ಕೇಂದ್ರ. ಈ ಕ್ಲಬ್ನಿಂದ ಹೊರ ಹೊಮ್ಮಿದ ಪ್ರತಿಭೆ ಸತ್ಯಪ್ರಕಾಶ್. ಇವರು ಮುಂದೆ ಯುಪಿಎಸ್ಸಿ ಪರೀಕ್ಷೆಯಲ್ಲಿ ದೇಶಕ್ಕೇ ದ್ವಿತೀಯ ಸ್ಥಾನ ಪಡೆದು, ಈಗ ಹರಿಯಾಣಾದಲ್ಲಿ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಅವರು ಚಿತ್ರದುರ್ಗಕ್ಕೆ ಆಗಮಿಸಿದ್ದಾಗ ಅಲ್ಲಿ ಬೇದ್ರೆ ನಡೆಸುತ್ತಿರುವ ಯೂತ್ ಕ್ಲಬ್ ಗೆ ಹೋಗಿ, ಅಲ್ಲಿದ್ದ ಯುವಕರೊಂದಿಗೆ ಸಂವಾದ ನಡೆಸಿದ್ದರು. ಆಗ ಅವರು ಹೇಗೆ ಶಿವಮೊಗ್ಗದಲ್ಲಿದ್ದ ಕ್ಲಬ್ ತಮ್ಮ ಐಎಎಸ್ಗೆ ಸಹಕಾರಿಯಾಯ್ತು ಎಂದು ನೆನಪಿಸಿಕೊಂಡಿದ್ದರು.
ಹೀಗೆ ಬೇದ್ರೆ ಗರಡಿಯಿಂದ ಹೊರ ಬಿದ್ದ ಅನೇಕರು ಇಂದು ಐಎಎಸ್, ಐಪಿಎಸ್, ಕೆಎಎಸ್, ಪಿಎಸ್ಐ, ಎಫ್ಡಿಎ, ಎಸ್ಡಿಸಿಗಳಾಗಿ ಹಾಗೂ ಖಾಸಗಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬೇದ್ರೆ ಕನಾಱಟಕ ಪತ್ರಿಕೋದ್ಯಮಕ್ಕೆ ಕೇವಲ ತಮ್ಮ ಬರವಣಿಗೆ ಮೂಲಕ ಕೊಡುಗೆ ನೀಡಿಲ್ಲ. ಅನೇಕ ಯುವ ಪತ್ರಕರ್ತರನ್ನು ಅವರು ಸಜ್ಜುಗೊಳಿಸಿದ್ದಾರೆ. ಇಂದು ಪತ್ರಿಕೋದ್ಯಮದಲ್ಲಿ ಹೆಸರು ಮಾಡುತ್ತಿರುವ ಕನ್ನಡಪ್ರಭದಲ್ಲಿರುವ ಕುಮಾರ್, ಮಂಜುನಾಥ್ ಸ್ವಾಮಿ, ಡೆಕ್ಕನ್ ಹೆರಾಲ್ಡ್ ನಲ್ಲಿರುವ ಸತೀಶ್ ಶಿಲೆ, ಇಂತಹ ಅನೇಕ ಪತ್ರಕರ್ತರು ಬೇದ್ರೆ ನೀಡಿದ ಕೊಡುಗೆ. ಕನ್ನಡವನ್ನು ಪ್ರೀತಿಸುವುದರ ಜೊತೆಗೇ ಇಂಗ್ಲೀಷ್ ಭಾಷೆಯ ಅನಿವಾರ್ಯತೆಯ ಅರಿವೂ ಅವರಿಗಿದೆ. ಹೀಗಾಗಿ ಅವರು ಇಂದಿಗೂ ಯುವಕರಿಗೆ ಇಂಗ್ಲಿಷ್ ತರಬೇತಿ ನೀಡುತ್ತಾರೆ. 1997 ರಲ್ಲೇ ಅವರು 150 ನೇ ಬ್ಯಾಚ್ಗೆ ತರಬೇತಿ ನೀಡಿದ್ದರು. ಹೀಗಾಗಿ ಈಗ ಬಹುತೇಕ 500 ಕ್ಕೂ ಹೆಚ್ಚು ಬ್ಯಾಚ್ಗಳಿಗೆ ಅವರು ತರಬೇತಿ ನೀಡಿದ್ದಾರೆ.
* * *
ಬೇದ್ರೆ ಅಷ್ಟೇ ನಿಷ್ಟುರ ಮನಸ್ಸಿನವರು. ತಮಗೆ ಸರಿಹೋಗದ್ದನ್ನು ನೇರವಾಗಿ ಹೇಳಲು ಅಥವಾ ‘ನೋ’ ಎಂದು ಹೇಳಲು ಎಂದಿಗೂ ಹಿಂಜರಿದವರಲ್ಲ. ಎಂತಹವರನ್ನೂ ತರಾಟೆಗೆ ತೆಗೆದುಕೊಳ್ಳದೆ ಬಿಟ್ಟಿಲ್ಲ. ಉತ್ತಮ ಪುಸ್ತಕಗಳನ್ನು ಚನ್ನಾಗಿದೆ ಎಂದು ವಿಮಶೆಱ ಬರೆಯುವ ಅವರು, ಕೆಟ್ಟ ಪುಸ್ತಕಗಳು ಬಂದಾಗ ಸರಿಯಾಗಿ ಝಾಡಿಸುತ್ತಾರೆ. ಕನ್ನಡದ ಬಹುತೇಕ ಎಲ್ಲಾ ಪತ್ರಿಕೆ, ಪೇಪರ್ಗಳಲ್ಲಿ ಅವರ ಬರಹಗಳು ಪ್ರಕಟಿತವಾಗಿವೆ. ಇಂದಿಗೂ ತಮ್ಮೆಲ್ಲಾ ಕೆಲಸಗಳ ನಡುವೆ ಪುಸ್ತಕ ವಿಮಶೆಱ ಮಾಡುತ್ತಾರೆ. ಹೊಸ ಲೇಖನ ಬರೆಯುತ್ತಾರೆ. ಒಂದಿಡೀ ಯುವಕರ ಗುಂಪನ್ನು ಪ್ರೇರೇಪಿಸುತ್ತಾರೆ. ಅವರನ್ನು ಕಟ್ಟಿಕೊಂಡು ಚಾರಣಕ್ಕೋ, ಅಧ್ಯಯನ ಪ್ರವಾಸಕ್ಕೋ, ಸಾಹಸ ಕ್ರೀಡೆಗೋ ಹೋಗಿ ಬಿಡುತ್ತಾರೆ. ಎಲ್ಲಿಯೂ ಪ್ರಚಾರ ಬಯಸಿಲ್ಲ. ರಾಜಕಾರಿಣಿಗಳನ್ನು ಕಂಡರೆ ಅಷ್ಟಕ್ಕಷ್ಟೇ! ಕೆಲಸಕ್ಕೆಂದೂ ಮೋಸ ಮಾಡಿದವರಲ್ಲ. ಬಿಡುವಿನ ವೇಳೆಯಲ್ಲಿ ಸೋಮಾರಿಯಾಗಿ ಸಮಯ ಕಳೆದು ನಮ್ಮಂತೆ ಸಮಯಕ್ಕೆ ದ್ರೋಹ ಬಗೆದವರು ಅಲ್ಲ. ಅವರನ್ನು ಬಿಡುವಾಗಿ ನೋಡಿದವರೇ ಅಪರೂಪ. ಅವಶ್ಯಕತೆಗಿಂತ ಹೆಚ್ಚು ಮಾತಿಲ್ಲ. ಒಣ ಹರಟೆ ಅವರಿಗೆ ಬೇಕಿಲ್ಲ. ಹರಟೆಯಲ್ಲೂ ಏನಾದರೂ ಹುರುಳಿರಬೇಕು. ಲೋಕದಾ ಡೊಂಕ ನೀವೇಕೆ ತಿದ್ದುವಿರಿ? ನಿಮ್ಮ ನಿಮ್ಮ ಡೊಂಕ ನೀವು ತಿದ್ದಿಕೊಳ್ಳಿ ಎಂಬ ಕವಿವಾಣಿಯ ತತ್ವ ಅವರದ್ದು. ಮನಸ್ಸೇ ರಿಲ್ಯಾಕ್ಸ್ ಪ್ಲೀಸ್ ಎನ್ನುವ ಸ್ವಭಾವ ಅವರದ್ದಲ್ಲ. ಮನಸ್ಸೇ ಡೋಂಟ್ ರಿಲ್ಯಾಕ್ಸ್ ಪ್ಲೀಸ್ ಎಂಬ ಹಠ ಅವರದ್ದು. ಇರುವುದೊಂದೇ ಜೀವನ. ಅದನ್ನು ಸಾರ್ಥಕ ಪಡಿಸಿಕೊಳ್ಳಲು ಮನಸ್ಸನ್ನು ಸರಿಯಾಗಿ ಬಳಸಿ, ಕ್ರಿಯಾಶೀಲವಾಗಿಡಬೇಕು. ರಿಲ್ಯಾಕ್ಸ್ ಆಗಿ, ಸೋಮಾರಿಗಳಾಗಬಾರದು ಎಂಬ ಆಶಾಭಾವ ಅವರದ್ದು.
ಹೀಗಾಗಿ ಬೇದ್ರೆ ಸ್ವಭಾವ ಅವರ ಹತ್ತಿರಕ್ಕೆ ಹೋಗದವರಿಗೆ ಒಂದು ದೊಡ್ಡ ಪ್ರಶ್ನಾರ್ಥಕ ಚಿಹ್ನೆ.
* * *
ದುರ್ಗದಂತಹ ಊರಿನಲ್ಲಿದ್ದುಕೊಂಡೇ, ಅನೇಕ ಅಸಾಧ್ಯಗಳನ್ನು ಸಾಧ್ಯವಾಗಿಸಿದ ಬೇದ್ರೆ ಅವರನ್ನು ಜಿಲ್ಲೆಯ ಶೈಕ್ಷಣಿಕ ಸಮುದಾಯ ಅಷ್ಟು ಸಮರ್ಪಕವಾಗಿ ಬಳಕೆ ಮಾಡಿಲ್ಲ. ಅವರ ದೈತ್ಯ ಶಕ್ತಿ ಆಕಾಶವಾಣಿಯೊಂದೇ ಬಳಸಿಕೊಳ್ಳಲಿ ಎಂದು ಜಿಲ್ಲೆಯ ಪ್ರಜ್ಞಾವಂತರು, ಶಿಕ್ಷಕರು, ಅನೇಕ ವಿದ್ಯಾಥರ್ಿಗಳು ಭಾವಿಸಿದಂತಿದೆ. ಈ ಎಲ್ಲರೂ ತಮ್ಮ ಸೋಮಾರಿತನ ಬಿಟ್ಟು ಬೇದ್ರೆ ಬೆನ್ನು ಬಿದ್ದಲ್ಲಿ, ಅವರಿಂದ ಇನ್ನೂ ಅನೇಕ ಅಮೋಘ, ಅದ್ಭುತ ಕೆಲಸಗಳನ್ನು ಮಾಡಿಸಬಹುದು. ಅವರನ್ನು ಸದುಪಯೋಗ ಪಡಿಸಿಕೊಳ್ಳುವ ಸೌಭಾಗ್ಯ ಚಿತ್ರದುರ್ಗಕ್ಕೆ, ಕನ್ನಡ ಪತ್ರಿಕೋದ್ಯಮಕ್ಕೆ, ಯುವಕರಿಗೆ ದೊರೆಯಲಿ.
* * *
ಇಂತಹ ಬೇದ್ರೆ ಅವರಿಂದ ನಾನಂತೂ ಸಾಕಷ್ಟು ಕಲಿತಿದ್ದೇನೆ. ದೂರದ ದಿಲ್ಲಿಯಲ್ಲಿ ಬಿಡುವಿಲ್ಲದಿದ್ದರೂ, ನಿತ್ಯ ಒಂದು ಸಲವಾದರೂ ಅವರನ್ನು ನೆನಪಿಸಿಕೊಳ್ಳುತ್ತೇನೆ.
ಆದರೆ ಕಲಿಯಬೇಕಾದ್ದು ಇನ್ನೂ ಸಾಕಷ್ಟಿದೆ.
ಈಗ ಹೇಳಿ…
ಇಂತಹ ಕ್ರಿಯಾಶೀಲರನ್ನು ನೋಡಿ, ನಮ್ಮಂತಹ ಸೋಮಾರಿಗಳಿಗೆ ಹೊಟ್ಟೆ ಕಿಚ್ಚು ಆಗುತ್ತದೋ ಇಲ್ಲವೋ?
ನಾವು ಅವರಂತೆ ಕ್ರಿಯಾಶೀಲರಾಗುವುದು ಯಾವಾಗ??
