ಎಕ್ಲ ಚಲೋ ರೇ ಗೆ ಬಂದ ಪ್ರತಿಕ್ರಿಯೆ ನನ್ನನ್ನು ಅಚ್ಚರಿಗೆ ದೂಡಿದೆ. ಈ ಹಾಡು ಅನೇಕರನ್ನು ತಟ್ಟಿದೆ. ಹಾಗೆಯೇ ಇಲ್ಲಿ Chitto jetha bhayashunyo ಅಂದರೆ Where the mind is without fear ಪ್ರಕಟಿಸಬೇಕೆಂದಿದ್ದೆ. ಉಮಾಪತಿ ಸರ್ ಅದರ ಚರ್ಚೆಗೆ ತಮ್ಮ ಕಾಮೆಂಟ್ ನಲ್ಲೇ ನಾಂದಿ ಹಾಡಿದ್ದರು. ಆದರೆ ನನಗೆ ಈಗ ಇಲ್ಲಿ ಬಂದಿರುವ ಕಾಮೆಂಟ್ ಗಳನ್ನು ನೋಡಿದಾಗ Where the mind is without fear ಗೆ ಕನಿಷ್ಟ 4-5 ಕನ್ನಡ ಭಾವಾನುವಾದಗಳು ಇರುವ ಹಾಗೆ ಕಂಡು ಬರುತ್ತಿದೆ.
Where the mind is without fear ಇದನ್ನು ರವಿಂದ್ರರು ಸ್ವಾತಂತ್ರ ಪೂರ್ವವೇ, ಜಾಗೃತ ಭಾರತ ಹೇಗಿರಬೇಕು ಎಂದು ಧ್ಯಾನಿಸಿ ಬರೆದಿದ್ದರು. ಮೂಲ ಬಂಗಾಳಿ. ಅದನ್ನು ಸ್ವತ: ರವಿಂದ್ರರೇ ಇಂಗ್ಲಿಷ್ ಗೆ ಅನುವಾದಿಸಿದ್ದರು. ನಂತರ ಅದು ಬಹುತೇಕ ಜಗತ್ತಿನ ಎಲ್ಲಾ ದೇಶಗಳ ವಿವಿಧ ಭಾಷೆಗಳಿಗೆ ಅನುವಾದಗೊಂಡಿದೆ ಎಂದರೆ ತಪ್ಪಿಲ್ಲ. ಮೂಲ ಬಂಗಾಳಿ ಕವನ 1912 ರಲ್ಲೇ ನೋಬೆಲ್ ವಿಜೇತ ಕೃತಿ ಗೀತಾಂಜಲಿಯಲ್ಲಿ ಸೇರ್ಪಡೆಯಾಗಿತ್ತು.
ಈಗ ಇಲ್ಲಿ ಬಂಗಾಳಿ ಮೂಲ, ಇಂಗ್ಲೀಷ್ ಅನುವಾದ, ಶ್ರೀ ಕಳುಹಿಸಿಕೊಟ್ಟಿರುವ ಅನುವಾದ ಹಾಗೂ ಉಮಾಪತಿ ಸರ್ ನೀಡಿದ್ದ ಕಾಮೆಂಟಿನಲ್ಲಿದ್ದ ಅನುವಾದದ ಒಂದೆರಡು ಸಾಲುಗಳಿವೆ. ರವಿಶಂಕರ್ ಸಹ ವೆಂಕಟೇಶ ಮೂರ್ತಿಯವರ ಭಾವಾನುವಾದದ ಬಗ್ಗೆ ಉಲ್ಲೇಖಿಸಿದ್ದಾರೆ. ದಯವಿಟ್ಟು ಯಾರಿಗಾದರೂ ನಿಜಕ್ಕೂ ಎಷ್ಟು ಅನುವಾದಗಳಿವೆ? ಅವುಗಳ ಪೂರ್ಣ ಪಾಠ ಇದೆಯಾ? ಇದ್ದರೆ ದಯವಿಟ್ಟು ಇಲ್ಲಿ ಪೋಸ್ಟ್ ಮಾಡಿ. ನಾವು ಅನೇಕರು ಅದರ ಸಶಕ್ತ ಭಾವಾನುವಾದ ಓದಲು ಕಾಯುತ್ತಿದ್ದೇವೆ. ಅಲ್ಲದೇ ಒಂದೇ ಕವನ ಹೇಗೆ ಬೇರೆ ಬೇರೆ ಭಾವಾನುವಾದಗಳಲ್ಲಿ ವಿಭಿನ್ನವಾಗಿ ವ್ಯಕ್ತವಾಗಿದೆ ಎಂದೂ ತಿಳಿಯಬಹುದು.
The English version is:
Where the mind is without fear and the head is held high;
Where knowledge is free;
Where the world has not been broken up into fragments by narrow domestic walls;
Where words come out from the depth of truth;
Where tireless striving stretches its arms towards perfection;
Where the clear stream of reason has not lost its way into the dreary desert sand of dead habit;
Where the mind is led forward by thee into ever-widening thought and action …
Into that heaven of freedom, my father, let my country awake.
The original Bengali version is:
চিত্ত যেথা ভয়শূন্য উচ্চ যেথা শির, জ্ঞান যেথা মুক্ত, যেথা গৃহের প্রাচীর
আপন প্রাংগণতলে দিবস-শর্বরী বসুধারে রাখে নাই খণড ক্ষুদ্র করি,
যেথা বাক্য হৃদযের উতসমুখ হতে উচ্ছসিয়যা উঠে, যেথা নির্বারিত স্রোতে,
দেশে দেশে দিশে দিশে কর্মধারা ধায় অজস্র সহস্রবিধ চরিতার্থতায়,
যেথা তুচ্ছ আচারের মরু-বালু-রাশি বিচারের স্রোতঃপথ ফেলে নাই গ্রাসি –
পৌরুষেরে করেনি শতধা, নিত্য যেথা তুমি সর্ব কর্ম-চিংতা-আনংদের নেতা,
নিজ হস্তে নির্দয় আঘাত করি পিতঃ, ভারতেরে সেই স্বর্গে করো জাগরিতচিত্ত যেথা ভয়শূন্য উচ্চ যেথা শির, জ্ঞান যেথা মুক্ত, যেথা গৃহের প্রাচীর
আপন প্রাংগণতলে দিবস-শর্বরী বসুধারে রাখে নাই খণড ক্ষুদ্র করি,
যেথা বাক্য হৃদযের উতসমুখ হতে উচ্ছসিয়যা উঠে, যেথা নির্বারিত স্রোতে,
দেশে দেশে দিশে দিশে কর্মধারা ধায় অজস্র সহস্রবিধ চরিতার্থতায়,
যেথা তুচ্ছ আচারের মরু-বালু-রাশি বিচারের স্রোতঃপথ ফেলে নাই গ্রাসি –
পৌরুষেরে করেনি শতধা, নিত্য যেথা তুমি সর্ব কর্ম-চিংতা-আনংদের নেতা,
নিজ হস্তে নির্দয় আঘাত করি পিতঃ, ভারতেরে সেই স্বর্গে করো জাগরিত ||
ಶ್ರೀ ಕಳುಹಿಸಿರುವ ಎಂ.ಎನ್ ಕಾಮತ್ ಅವರ ಅನುವಾದ:
ಎಲ್ಲಿ ಮನಕಳುಕಿರದೋ ಎಲ್ಲಿ ತಲೆ ಬಾಗಿರದೋ
ಎಲ್ಲಿ ತಿಳಿವಿಗೆ ತೊಡಕು ತೋರದಿಹುದಲ್ಲಿ
ಎಲ್ಲಿ ಮನೆಯೊಕ್ಕಟ್ಟು ಸಂಸಾರ ನೆಲೆಗಟ್ಟು
ಧೂಳೊಡೆಯದಿಹುದೋ ತಾನಾನಾಡಿನಲ್ಲಿ
ಎಲ್ಲಿ ಸತ್ಯದಗಾಧ ನೆಲೆಯಿಂದ ಸವಿವಾತು
ಸಲ್ಲಲಿತ ನಡೆಯಿಂದ ಮುಂಬರಿವುದಲ್ಲಿ
ಎಲ್ಲಿ ದಣಿವಿರದ ಸಾಧನೆಯು ಸಫಲತೆಗೆಡೆಗೆ
ತೋಳ ನೀಡಿಹುದೋ ತಾನಾನಾಡಿನಲ್ಲಿ
ಎಲ್ಲಿ ಸುವಿಚಾರ ನಿರ್ಮಲ ಜಲದೊಸರು ಹರಿದು
ಕಾಳರೂಢಿಯ ಮರಳೊಳಿಂಗಿ ಕೆಡದಲ್ಲಿ
ಎಲ್ಲಿ ನೀನೆಮ್ಮ ಚಿಂತನವನುದ್ಯಮವ ಸುವಿ-
-ಶಾಲತೆಯ ಪೂರ್ಣತೆಗೆ ಮುಂಬರಿಸುವಲ್ಲಿ
ಅಲ್ಲಿಯಾ ಬಂಧನ ರಹಿತ ಸುಖದ ಸ್ವರ್ಗದಲಿ
ಪಾಲಿಸೈ ಪಿತ ನಮ್ಮ ನಾಡೆಚ್ಚರಿರಲಿ !
ಹೀಗಿದೆ. ಕರ್ನಾಟಕದ ಶಾಲೆಗಳಲ್ಲಿ ಇದು ಪ್ರಾರ್ಥನೆಯಾಗಿದ್ದಿರಬೇಕಲ್ಲ?
ಉಮಾಪತಿ ಸರ್ ಕಾಮೆಂಟಿನಲ್ಲಿರುವ ಅನುವಾದ: ಅನುವಾದರಕರ ಹೆಸರು ಗೊತ್ತಿಲ್ಲ. ಒಂದೆರಡು ಸಾಲುಗಳು ಮಾತ್ರ ಇಲ್ಲಿವೆ. ಪ್ರಾಯಶ: ಇವು ಹೆಚ್ಚು ಸಶಕ್ತವಾಗಿವೆ ಎನಿಸುತ್ತದೆ.
ಆ ಸ್ವತಂತ್ರ ಸ್ವರ್ಗಕೇ ನಮ್ಮ ನಾಡು ಏಳಲೇಳಲೇಳಲೇಳಲೀ…..
ಎಲ್ಲಿ ಮನವು ನಿರ್ಭಯದಿ ತಲೆಯನೆತ್ತಿ ನಿಲುವುದೋ..
ಎಲ್ಲಿ ಮಾತು ಸತ್ಯದಾಳದಿಂದ ಹೊಮ್ಮಿ ಬರುವುದೋ ಆ ಸ್ವತಂತ್ರ ಸ್ವರ್ಗಕೇ
ಇದರ ಪೂರ್ಣ ಅನುವಾದ ತಿಳಿದವರು ದಯವಿಟ್ಟು ಇಲ್ಲಿ ಪ್ರಕಟಿಸಿ.